ನಿವೃತ್ತಿ ಯೋಧನಿಗೆ ಅದ್ದೂರಿಯಿಂದ ಸ್ವಾಗತ ಮಾಡಿದ ಗ್ರಾಮಸ್ಥರ
ನಿವೃತ್ತಿ ಯೋಧನಿಗೆ ಅದ್ದೂರಿಯಿಂದ ಸ್ವಾಗತ ಮಾಡಿದ ಗ್ರಾಮಸ್ಥರ
ಮುದ್ದೇಬಿಹಾಳ: ತಾಲ್ಲೂಕಿನ ಘಾಳಪೂಜಿ ಗ್ರಾಮದ ರಾಜು ಹಣಮಂತಪ್ಪ ನಾಗರಬೆಟ್ಟ ಅವರು ಭಾರತೀಯ ಬಿಎಸ್ಎಪ್ ನಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ಪೆಬ್ರವರಿ 5 ಸೋಮವಾರದಂದು ತನ್ನ ಸ್ವಗ್ರಾಮಕ್ಕೆ ಆಗಮಿಸಿದರು. ಗ್ರಾಮಸ್ಥರು ಮತ್ತು ಶಾಲೆಯ ವಿದ್ಯಾರ್ಥಿಗಳು ನಿವೃತ್ತ ಸೈನಿಕನನ್ನು ಗ್ರಾಮದ ಶ್ರೀ ಚೆನ್ನ ಬಸವೇಶ್ವರ ದೇವಸ್ಥಾನದಲ್ಲಿ ಹೂಮಾಲೆ ಹಾಕಿ ಸನ್ಮಾನಿಸಿ ನಿವೃತ್ತಿ ಯೋಧನನ್ನು ಗ್ರಾಮಕ್ಕೆ ಬರಮಾಡಿಕೊಂಡರು. ಇದೇ ವೇಳೆಯಲ್ಲಿ ಗ್ರಾಮಸ್ಥರಾದ ಡಿ ಬಿ ನಾಡಗೌಡ್ರು ಅಧ್ಯಕ್ಷರು ಪಿಕೆಪಿಎಸ್ ಅಧ್ಯಕ್ಷರು ಘಾಳಪೂಜಿ, ಬಿ ಎಚ್ ನಾಗರಬೆಟ್ಟ ಮಾಜಿ ಅಧ್ಯಕ್ಷರು ಪಿಕೆಪಿಎಸ್ ಬ್ಯಾಂಕ್ ಘಾಳಪೂಜಿ, ಮಲ್ಲಪ್ಪ ಜೂಲಗೂಡ್ಡ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಬಿ ಎಸ್ ಕಣಕಾಲಮಠ ನಿವೃತ್ತ ಮುಖ್ಯ ಗುರುಗಳು, ಸಿದ್ದಪ್ಪ ಶರಣರು ನಾಗರಬೆಟ್ಟ,ತಿಪ್ಪಣ್ಣ ಹುಗ್ಗಿ,ಯಲ್ಲಪ್ಪ ನಾಗರಬೆಟ್ಟ,ನಾಗೇಶ ಬಾಚಿಬಾಳ,ಬಸಣ್ಣ ಹಟ್ಟಿ,ಗಂಗಾಧರ ಜೂಲಗುಡ್ಡ,ಬಸಯ್ಯ ಹೀರೆಮಠ, ಚಂದ್ರಶೇಖರ ಮುದ್ನಾಳ, ರಘುನಾಥ ಸಾಸನೂರ,ಶಿವಪುತ್ರ ಬಂಗಾಳಿ, ಹಣಮಂತ ಹಗರಗುಂಡ ಸೇರಿದಂತೆ ಇನ್ನಿತರರು ಇದ್ದರು.